Friday, 5 September 2014

 
ಮುಮ್ಮಿಗಟ್ಟಿ ಕ್ಲಸ್ಟರ ಮಟ್ಟಡ ಕ್ರೀಡಾಕೂಟ.2014.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೇಲೂರ ತಾ ಧಾರವಾಡ ಇಲ್ಲಿ ಮುಮ್ಮಿಗಟ್ಟಿ ಕ್ಲಸ್ಟರ ಮಟ್ಟದ ಕ್ರೀಡಾ ಕೂಟವನ್ನು ಟಾ ಟಾ ಮೋಟರ್ಸ್ ಇವರ ಸಹಯೋಗದೊಂದಿಗೆ ದಿನಾಂಕ 6-8- 2014 ರಂದು ಸಂಘಟಿಸಲಾಯಿತು. ಈ ಕ್ರೀಡಾಕೂಟವನ್ನು ಟಾ ಟಾ ಮೋಟರ್ಸ್ ಅಧಿಕಾರಿಗಳಾದ ಶ್ರೀ ಚನ್ನಬಸವಣ್ಣ ಅಲೆಗೌಡರ ಇವರು ಉದ್ಘಾಟಿಸಿದರು. ಇವರು ಮಾತನಾಡುತ್ತ ಅಭ್ಯಾಸದ ಜೋತೆಗೆ ಆಟಗಳು ಮಹತ್ವವನ್ನು ಪಡೆದಿವೆ. ಇನ್ನು ಹೆಚ್ಚಿಗೆ ಆಟಗಳಿಗೆ ಮಹತ್ವನ್ನು ನೀಡಿ ಮಕ್ಕಳ ದೈಹಿಕ ಬೆಳವಣಿಗೆಗೆ ಸಹಾಯಕವಾಗುತ್ತದೆ. ದೈಹಿಕ ಶಿಕ್ಷಣಕ್ಕೂ ಹೆಚ್ಚಿನ ಮಹತ್ವವನ್ನು ನೀಡಬೇಕು ಎಂದರು.
ಮುಖ್ಯ ಅಥಿತಿಗಳಾಗಿ ಜಿಲ್ಲಾ ಪಂಚಾಯತಿಯ ಸದಸ್ಯರಾದ ಶ್ರೀಮತಿ ಪ್ರೇಮಾ ಕೋಮಾರ ದೇಸಾಯಿ ಇವರು ಮಾತನಾಡುತ್ತ ಮಕ್ಕಳ ಆರೋಗ್ಯಕ್ಕೆ ದೈಹಿಕ ಶಿಕ್ಷಣ ಮುಖ್ಯ ಗೆಲುವಿಗಿಂತ ಆಟಗಳಲ್ಲಿ ಭಾಗವಹಿಸುವುದು ಮುಖ್ಯ, ಆಟಗಳಲ್ಲಿ ಬಾಗವಹಿಸಿ ಉತ್ತಮ ಕ್ರೀಡಾ ಪಟುಗಳಾಗಿ ಬೆಳೆಯಿರಿ ಎಂದು ಮಕ್ಕಳಿಗೆ ಕರೆ ನೀಡಿದರು.
ಉದ್ಘಾಟನಾ ಸಭೆಯ ಅಧ್ಯಕ್ಷತೆಯನ್ನು ಶ್ರೀ ಬಸಪ್ಪಪೂಜಾರ ಎಸ್ ಡಿ ಎಮ ಸಿ ಅಧ್ಯಕ್ಷರು ವಹಿಸಿದ್ದರು. ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಸುಶೀಲಾ ಚಿಕ್ಕಣ್ಣವರ ಅತಿಥಿಗಳಾಗಿ ಬಾಗವಹಿಸಿದ್ದರು. ಶ್ರೀ ಮಡಿವಾಳಪ್ಪ ನೇಕಾರ, ಶ್ರಿಮತಿ ಬಡಿಗೇರ ,ಶ್ರೀ ಜಲದೇವ ಹೆಗ್ಗೇರಿ,ಶ್ರೀ ಕಲ್ಲಪ್ಪ ಸಂದೂರಿ, ಗ್ರಾಮ ಪಂಚಾಯಿತ ಸದಸ್ಯರು. ಎಸ್ ಡಿ ಎಂ ಸಿ ಸದಸ್ಯರಾದ ಶ್ರೀ ರಾಜು ಮಲ್ಲಗವಾಡ, ದ್ಯಾಮವ್ವ ಹುಲ್ಲಂಬಿ, ಶ್ರೀ ರುದ್ರಪ್ಪ ಹೆಗ್ಗೇರಿ. ಕಲ್ಲಪ್ಪ ಮಾದಾರಿ ಟಾ ಟಾ ಮೋಟರ್ಸನ ಶ್ರೀ ಜಿ ವಿ ಹಿರೇಮಠ, ಶ್ರೀ ದೇಸಾಯಿ ಭಾಗವಹಿಸಿದ್ದರು.
ಸಾಯಂಕಾಲ ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಣಾ ಸಮಾರಂಬದಲ್ಲಿ ತಾಲೂಕಾ ಪಂಚಾಯತಿ ಸದಸ್ಯರಾದ ಶ್ರೀ ಧಶರತರಾವ ಕೆ ದೇಸಾಯಿ ಇವರು ಬಾಗವಹಿಸಿ ಮಾತನಾಡಿ ಆಟಗಳು ಮಕ್ಕಳಲ್ಲಿ ಹೊಸ ಹರುಪು ನೀಡುತ್ತವೆ ಪಾಠ ಗಳು ಬೌಧ್ಧಿಕ ಬೆಳವಣಿಗೆಗೆ ಸಹಕಾರಿಯಾದರೆ, ಆಟಗಳು ದೈಹಿಕ ಬೆಳವಣಿಗೆಗೆ ಸಹಕಾರಿ ಎಂದರು ಟಾ ಟಾ ಮೋಟರ್ಸನ ಶ್ರೀ ಜಿ ವಿ ಹಿರೇಮಠ, ಶ್ರೀ ದೇಸಾಯಿ ಭಾಗವಹಿಸಿ ತಮ್ಮ ಕಂಪನಿಯಿಂದ ಮಕ್ಕಳಿಗೆ ಬಹುಮಾನವನ್ನು ವಿತರಿಸಿದರು.ಅಧ್ಯಕ್ಷತೆಯನ್ನು ಶ್ರೀ ಬಸಪ್ಪಪೂಜಾರ ಎಸ್ ಡಿ ಎಮ ಸಿ ಅಧ್ಯಕ್ಷರು ವಹಿಸಿದ್ದರು. ಬಿ ಆರ್ ಪಿ ಶ್ರೀಮತಿ ಶಶಿಕಲಾ ಕುರಿ, ಸಿ ಆರ್ ಪಿ ಶ್ರೀ ಎಂ ವಿ ಛಬ್ಬಿ, ಪ್ರಧಾನ ಗುರುಗಳು ಶ್ರೀಮತಿ ನ ಜೆ ಕೊಂಗನೋಳ್ಳಿ, ಗ್ರಾಮದ ಯುವಕ ಮಂಡಳದ ಯುವಕರು ಗ್ರಾಮಸ್ಥರು ಭಾಗವಹಿಸಿದ್ದರು,
ಟಾ ಟಾ ಮಾರ್ಕೋಪೋಲೆ ಕಂಪನಿ ಸಹಕಾರದೊಂದಿಗೆ ಸಿಬ್ಬಂದಿಗಳಿಗೆ ಊಟ ಉಪಹಾರದ ವ್ಯವಸ್ಥೆಯನ್ನು ಮಾಡಿದ್ದರು ಎಲ್ಲರ ಸಹಕಾರದೊಂದಿಗೆ ಈ ದಿನ ಕ್ರೀಡಾ ಹಬ್ಬವಾಗಿ ಸಂಬ್ರಮ ದಿಂದ ನಡೆಯಿತು.

2014-15 ನೇ ಸಾಲಿನ ಮುಮ್ಮಿಗಟ್ಟಿ ಕ್ಲಸ್ಟರ ಮಟ್ಟದ  ಕ್ರೀಡಾ ಟಾಟಾ ಮೋಟರ್ಸ ಸಹಯೋಗದೊಂದಿಗೆ ದಿ ನಾಂಕ 6-8-2014 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೇಲೂರ ಇಲ್ಲಿ ನಡೆಯಿತು.



ಉದ್ಘಾಟಕರಾದ ಟಾ ಟಾ ಮೋಟರ್ಸನ ಅಧಿಕಾರಿಗಳಾದ ಶ್ರೀ ಬಸವಣ್ಣಗೌಡ ಆಲೆಗೌಡರ ಮಾತನಾಡುತ್ತಿರುವದು.
ಜಿಲ್ಲಾ ಪಂಚಾಯತಿಯ ಸದಸ್ಯರಾದ ಶ್ರೀಮತಿ ಪ್ರೇಮಾ ಕೋಮಾರದೇಸಾಯಿ ಮುಖ್ಯ ಅಥಿತಿಗಳಾಗಿ ಭಾಗವಸಿದ್ದರು



No comments:

Post a Comment